ರಾಜ ಯೋಗದ ಪ್ರಭಾವ

ನನ್ನ ಗುರುದೇವ

(ಇಂಗ್ಲಿಷ್ ಮೂಲದಿಂದ)   ‘ಮಹಾಪುರುಷರು ಅಕಸ್ಮಾತ್ತಾಗಿ ಹುಟ್ಟುವುದಿಲ್ಲ’ ಕಾಲದ ಅತ್ಯಾವಶ್ಯಕತೆಗನುಸಾರವಾಗಿ ಉದಯಿಸಿ ತಮ್ಮ ಕಾರ್ಯವನ್ನು ಪೂರೈಸಿ ಹೋಗುವರು. ಹೀಗಿದೆ ನಿಸರ್ಗದ ನಿಯಮ.ಎಂದಿನಿಂದಲೂ ಅಧ್ಯಾತ್ಮದ ನೆಲೆವೀಡಾದ ಭಾರತವು ತನ್ನ ಪುರಾತನ ಯೋಗ ಪದ್ದತಿಯ ಪರಂಪರೆಯನ್ನು ಸಂಪೂರ್ಣ ಮರೆತು ಕತ್ತಲೆಯಲ್ಲಿ ತೊಳಲಾಡುತ್ತಿದ್ದಿತು. ಸೂಕ್ಷ್ಮವಾದ ಅಧ್ಯಾತ್ಮಕತೆಯ ಬದಲು ಜಡವಾದ ಭೌತಿಕತೆಯು ನೆಲೆಸಿದ್ದಿತು.ಅಜ್ಞಾನದ...

ಅನುವಾದಕನ ಅರಿಕೆ

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀ ರಾಮಚಂದ್ರಜಿಯವರ ಸಂಶೋಧನಗಳು ಬೆರಗುಗೊಳಿಸುವಂಥವಾಗಿವೆ. Efficacy of Raja yoga in the Light of Sahara Marg ಎಂಬ ಗ್ರಂಥವು ಅಂಥದೊಂದು ಸಂಶೋಧನವನ್ನೊಳಗೊಂಡಿದ್ದು ಅವರ ಅತ್ಯುತ್ತಮ ಕೃತಿಗಳಲ್ಲೊಂದಾಗಿದೆ.ಕನ್ನಡ ಜನತೆಗೆ ಅದರ ಪರಿಚಯವಾಗಲೆಂಬ ದೃಷ್ಟಿಯಿಂದ ಅದನ್ನು ಕನ್ನಡಿಸಿದ್ದೇನೆ. ಮೂಲದ ಅಭಿಪ್ರಾಯವು ಯಥಾವತ್ತಾಗಿ ಮೂಡಿಬರುವಂತೆ ಪ್ರಯತ್ನಿಸಲಾಗಿದೆ....

ಒಂದು ಮಾತು

(ಇಂಗ್ಲಿಷ್ ಮೂಲದಿಂದ) ಈ ಪುಸ್ತಕವು ಪ್ರಜ್ಞಾನದ ಸ್ಥಿತಿಯಲ್ಲಿ ಬರೆಯಲಾಗಿದೆ. ಇದರಲ್ಲಿ ವಿವರಿಸಲಾದ ಸಂಗತಿಗಳು ಕೇವಲ ದಿವ್ಯಾನುಭವ ಅಥವಾ ದಿವ್ಯದೃಷ್ಟಿಯನ್ನವಲಂಬಿವೆ. ಓದುಗರು ಆಯಾ ಸ್ಥಿತಿಗಳನ್ನು ಪ್ರತ್ಯಕ್ಷವಾಗಿ ಹೊಂದಿದಾಗಲೇ ಅವುಗಳ ವಾಸ್ತವಿಕತೆಯನ್ನು ಚೆನ್ನಾಗಿ ಮನಗಾಣುವರು. ಪುಸ್ತಕದಲ್ಲಿ ಉಲ್ಲೇಖಿಸಲಾದಂತೆ,(ನಿಸರ್ಗದಲ್ಲಿ)ಬದಲಾವಣೆಗಾಗಿ ಕೆಲಸ ಮಾಡುತ್ತಿರುವ ವಿಭೂತಿಯು ಉತ್ತರ ಭಾರತದಲ್ಲಿ ಒಂದು ಕಡೆಗೆ ವಾಸಿಸುತ್ತಿದ್ದು ಅದಕ್ಕಾಗಿ...

ಪ್ರಸ್ತಾವನೆ

(ಇಂಗ್ಲಿಷ್  ಮೂಲದಿಂದ) ಭಾರತವು ಆಧ್ಯಾತ್ಮದ ನೆಲೆವೀಡಾಗಿದೆ‌.ಅನೇಕನೇಕ  ಮಹರ್ಷಿಗಳೂ ಆಚಾರ್ಯರೂ‌ ತಮ್ಮ ಜೀವನವನ್ನು ಇದಕ್ಕಾಗಿಯೇ ಮುಡುಪಾಗಿಟ್ಟು ದೇವರ ಸಾಕ್ಷಾತ್ಕಾರ ಹೊಂದಿ  ಪರಿಪೂರ್ಣತೆಯ ಶಿಖರವನ್ನು ತಲುಪಿದ್ದಾರೆ.ಅಜ್ಞಾನದ ಅಂಧಕಾರವನ್ನು ತೊಲಗಿಸಿ  ಜನತೆಯಲ್ಲಿ  ಜ್ಞಾನದ ಬೆಳಕನ್ನು  ಬೀರಿದ ಮಹಾವಿಭೂತಿಗಳಲ್ಲಿ ಮಹಾತ್ಮಾ ಬುದ್ಧ, ಚೈತನ್ಯ ಮಹಾಪ್ರಭುಗಳು, ಸ್ವಾಮಿ ವಿವೇಕಾನಂದರು ಹಾಗೂ ಫತೆಹ್ ಗಡದ ಸಮರ್ಥ...

ಮುನ್ನುಡಿ

ಶ್ರೀ. ಆ.ಸರ್ನಾಡ ಅವರು ಕನ್ನಡಿಸಿದ ಈ ಕಿರುಹೊತ್ತಿಗೆ ರಾಜಯೋಗದ ಪ್ರಭಾವವನ್ನು ಕುರಿತಾಗಿದ್ದು ಆಧ್ಯಾತ್ಮಿಕ ಪ್ರಗತಿಯ ದಾರಿಯಲ್ಲಿ ಮಹಾತ್ಮಾ ರಾಮಚಂದ್ರಜಿ ಮಹಾರಾಜರು ಪಡೆದ ಅನುಭವಗಳ ಅಮೂಲ್ಯ ವಿವರಣೆಯಾಗಿದೆ. ಇದರಲ್ಲಿ, ಅವರ ಸ್ವಂತ ಸಂಶೋಧನೆಗಳ ಆಧಾರದ ಮೇಲೆ, ರಾಜಯೋಗದ ಮುಖ್ಯ ಸಾಧನವಾದ ಧ್ಯಾನದ ಮಹತ್ವವನ್ನು ಬಿಂಬಿಸಲಾಗಿದೆಯಲ್ಲದೇ ಆತ್ಮಸಾಕ್ಷಾತ್ಕಾರದ ಗುರಿಯತ್ತ ಕೊಂಡೊಯ್ಯುವ...

ರಾಜಯೋಗ

ರಾಜಯೋಗವು ಬಹು ಪ್ರಾಚೀನ ಶಾಸ್ತ್ರವಾಗಿದೆ.ಅದನ್ನು ದೊಡ್ಡ ದೊಡ್ಡ ಋಷಿ-ಮುನಿಗಳು ಆತ್ಮಸಾಕ್ಷಾತ್ಕಾರದಲ್ಲಿ ತಮಗೆ ಸಹಾಯಕವಾಗುವಂತೆ ಅನುಸರಿಸಿದರು.ಅದು ರಾಮಾಯಣ ಕಾಲಕ್ಕಿಂತ ಬಹಳ ಹಿಂದೆ ಭಾರತದಲ್ಲಿ ಪ್ರಚಲಿತವಾಗಿದ್ದಿತು.ಸೂರ್ಯ ವಂಶದ ದಶರಥ ಮಹಾರಾಜನಿಗಿಂತ ಎಪ್ಪತ್ತೆರಡು ತಲೆಮಾರುಗಳ ಹಿಂದೆ  ಇದ್ದ ಒಬ್ಬ ಮಹರ್ಷಿಯು ಅದನ್ನು ಪ್ರಚುರಪಡಿಸಿದನು. ಯಾವುದರಿಂದ ನಮ್ಮ ಜೀವನದ ಸಮಸ್ಯೆಗಳೆಲ್ಲ ಸುಲಭವಾಗಿ ಪರಿಹಾರವಾಗುವುವೋ...

ಸಹಜ ಮಾರ್ಗ

ನಾನಿಂದು ಸಹಜ ಮಾರ್ಗಾನುಸಾರ ನಮ್ಮ ರಾಜಯೋಗಪದ್ಧತಿಯ ಅತ್ಯದ್ಭುತವನ್ನು ತೋರಿಸಿಕೊಡುವೆನು.ಈ ಪದ್ಧತಿಯ ಪ್ರಭಾವವನ್ನು ತೀರ ಕೆಲಜನರು ಮನಗಂಡಿದ್ದಾರೆ. ನಾವು ಒಂದೇ ಒಂದು ವಸ್ತುವನ್ನು ದೈವೀಗುಣವನ್ನು ಮಾತ್ರ ಕುರಿತು ಚಿಂತನೆ ಮಾಡುವೆವು. ಅದನ್ನು ನಾವು ಗುರುವೆಂದಾಗಲಿ ಧ್ಯೇಯವಸ್ತುವೆಂದಾಗಲಿ ಕರೆಯುವೆವು.   * ಈಗ   ,  ಪುರುಷೋತ್ತಮನಾದಂಥ  ಆ ವ್ಯಕ್ತಿಯನ್ನು ಕುರಿತಾದ ಒಂದೇ...

ಧ್ಯಾನ

ರಾಜಯೋಗದಲ್ಲಿ ಸಾಮಾನ್ಯವಾಗಿ ನಾವು ಧ್ಯಾನದಿಂದ ಆರಂಭ ಮಾಡುವೆವು.ಇದಕ್ಕೊಂದು ದೊಡ್ಡ ತಾತ್ತ್ವಿಕ ತಳಹದಿಯಿದೆ. ನಾವು ಯಾವಾಗಲೂ ಪ್ರಾಪಂಚಿಕ ವಿಷಯಗಳಲ್ಲಿ ತೊಡಗಿರುವೆವು.ನಮಗೆ ಕೆಲಸವಿಲ್ಲದಾಗ ನಮ್ಮ ವಿಚಾರಗಳಿಗೆ ರೆಕ್ಕೆ ಮೂಡಿದಂತಾಗುವುದು. ನಾವು ಯಾವಾಗಲೂ ಗೊಂದಲ ಹಾಗೂ ಅವ್ಯವಸ್ಥೆಯಲ್ಲಿರುವೆವು.ನಮ್ಮ ವ್ಯಕ್ತಿಗತ ಮನಸ್ಸು ಈ ಸ್ಥಿತಿಗೆ ಹೊಂದಿಕೊಂಡಿರುವುದು.ಈ ಪ್ರಕಾರ ನಾವು ಎಲ್ಲವನ್ನೂ ತಿರುವುಮುರುವು ಮಾಡಿದ್ದೇವೆ....

ಹೃದಯ ಮಂಡಲ

ಸಾಮಾನ್ಯವಾಗಿ ಜನರು ಹೃದಯವನ್ನು ಕೇವಲ ರಕ್ತ – ಮಾಂಸಗಳಿಂದಾದ ವಸ್ತುವೆಂದು ತಿಳಿಯುವರು. ಹೃದಯದ ಬಗ್ಗೆ ವಿಚಾರ ಬಂದಾಗಲೆಲ್ಲ ಅವರು ರಕ್ತ-ಮಾಂಸಗಳಿಂದಾದ ಹೃದಯವಿರುವ ಸ್ಥಾನವನ್ನೇ ತೋರಿಸುವರು. ಹೃದಯ ಮಂಡಲವನ್ನು ವಿಶಾಲಾರ್ಥದಲ್ಲಿ ನೋಡಲಾದುದಕ್ಕೆ ಇದೊಂದು ತಡೆಯಾಗಿದೆ. ವಾಸ್ತವವಾಗಿ ಒಳ ಹೊರಗಿನ ಪ್ರತಿಯೊಂದು ವಸ್ತುವನ್ನೂ ಒಳಗೊಳ್ಳುವ ಒಂದು ವಿಶಾಲವೃತ್ತವಿದು. ಪರಾಮನಸ್ಸಿನ ಅನಂತರ...

ಮನೋಮಂಡಲ

ಹೃದಯಮಂಡಲವನ್ನು ದಾಟಿದ ನಂತರ ನಾವು ಭಗವಂತನ ಆದಿ ಮನವನ್ನು ಅಥವಾ ಪರಾಮನಸ್ಸನ್ನು ಪ್ರವೇಶಿಸುವೆವು. ಇಲ್ಲಿ ಅನುಭವಕ್ಕೆ ಬರುವ ಸ್ಥಿತಿಯನ್ನು ಯಾವ ಶಬ್ದಗಳಿಂದಲೂ ವರ್ಣಿಸಲಾಗದು. ಈ ವಿಸ್ತ್ರತವಾದ ಕ್ಷೇತ್ರದ ಕಲ್ಪನೆಯನ್ನು ತಂದುಕೊಡುವ ಹಲವು ಲಕ್ಷಣಗಳು ಮಾತ್ರ ಉಂಟು. ಹೃದಯಮಂಡಲದಲ್ಲಿ ನಾವು ಪಡೆದುಕೊಂಡುದು ಕಲ್ಪನೆಗೆ ನಿಲುಕಲಾರದು. ಈಗ ನಾವು ಉಚ್ಚತರ...